Monday, December 31, 2012

ಖಾದ್ರಿಗೆ ಕೃಷಿ ಋಷಿ ಪ್ರಶಸ್ತಿ ಪ್ರದಾನ


ಕಬ್ಬು ಬೆಳೆ ಉತ್ಪಾದನೆಯಲ್ಲಿ ಸಾಧನೆ ಮಾಡಿರುವ ಬಗದಲ್‌ ಗ್ರಾಮದ ಪ್ರಗತಿಪರ ರೈತ ಮೊಹ್ಮದ್‌ ಇದ್ರಿಸ್‌ ಅಹ್ಮದಸಾಬ್‌ ಖಾದ್ರಿ ಅವರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಕೊಡಮಾಡುವ 'ಕೃಷಿ ಋಷಿ' ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು. ತಾಲೂಕಿನ ಜನವಾಡ ಕೃಷಿ ವಿಜ್ಞಾನ ಕೇಂದ್ರದ ಪರಿಸರದಲ್ಲಿ ಆಯೋಜಿಸಿದ್ದ ಕೃಷಿ, ತೋಟಗಾರಿಕೆ ಮತ್ತು ಜಾನುವಾರು ಮೇಳ- 2012ರಲ್ಲಿ ಕೃಷಿ ವಿವಿ ಕುಲಪತಿ ಡಾ| ಬಿ.ವಿ.ಪಾಟೀಲ ಮತ್ತು ಪಶು ವಿಶ್ವವಿದ್ಯಾಲಯದ ಕುಲಪತಿ ಡಾ| ಸಿ.ರೇಣುಕಾಪ್ರಸಾದ ಖಾದ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹೈಯರ್‌ ಸೆಕೆಂಡರಿ ಶಿಕ್ಷಣ ಪಡೆದಿರುವ ಖಾದ್ರಿ ಪೂರ್ವಜರು ನಡೆಸಿಕೊಂಡು ಬಂದಿರುವ ಒಕ್ಕಲುತನವನ್ನು ಮೈಗೂಡಿಸಿಕೊಂಡಿದ್ದಾರೆ. ಕೇವಲ ಕೃಷಿಯಿಂದ ಮಾತ್ರ ರೈತರ ಬದುಕು ಹಸನಾಗದು ಎಂದು ನಂಬಿರುವ ಅವರು, ಕೃಷಿ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಹಾಲು ಉತ್ಪಾದನೆ ಮತ್ತು ಜಾನುವಾರುಗಳ ಸಗಣಿಯಿಂದ ಗೊಬ್ಬರದ ಸದ್ಬಳಕೆ ಮಾಡಿಕೊಂಡು ಆರ್ಥಿಕ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಪ್ರತಿ ಎಕರೆಗೆ 35 ಟನ್‌ ಕಬ್ಬು ಬೆಳೆಸುತ್ತಿದ್ದ ಅವರು ನಂತರ ತಾಂತ್ರಿಕ ಪದ್ಧತಿ ಅಳವಡಿಸಿಕೊಂಡು ಎಕರೆಗೆ 115 ಟನ್‌ ಕಬ್ಬು ಇಳುವರಿ ಪಡೆದಿದ್ದಾರೆ. ಐದು ಅಡಿ ಮುಕರಿಗಳಲ್ಲಿ ಮೂರು ಎಕರೆ ಜಮೀನಿನಲ್ಲಿ ಡ್ರಿಪ್‌ ಮಾಡಿ ಕಬ್ಬು ಬೆಳೆಸುತ್ತ ಬಂದಿದ್ದಾರೆ. ಕಳೆದ ಸಾಲಿನಲ್ಲಿ ಎಕರೆಗೆ 75 ಟನ್‌ ಕಬ್ಬು ಇಳುವರಿ ಪಡೆದಿದ್ದಾರೆ. ಖಾದ್ರಿ ಅವರೊಬ್ಬ ಪ್ರಯೋಗಶೀಲ ರೈತರಾಗಿದ್ದು, ರಾಜ್ಯ ಅಲ್ಲದೇ ದೇಶದ ವಿವಿಧೆಡೆಯಿಂದ ವಿವಿಧ ಬಗೆಯ ತಳಿಗಳನ್ನು ತಂದು ಬೆಳೆಸುತ್ತಾರೆ. ಈ ಮೂಲಕ ಜಿಲ್ಲೆಯ ಹವಾಗುಣಕ್ಕೆ ಯಾವ ತಳಿ ಹೊಂದಿಕೊಂಡು ಉತ್ತಮ ಇಳುವರಿ ಸಿಗಬಹುದು ಎಂಬುದರ ಮಾಹಿತಿ ಕಂಡುಕೊಳ್ಳುತ್ತಾರೆ. ಇಲ್ಲಿಯವರೆಗೆ ತಮ್ಮ ಜಮೀನಿನಲ್ಲಿ ಕೊಯಿಮತ್ತೂರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ತಂದಿರುವ 29 ತಳಿಗಳನ್ನು ಬೆಳೆದ ಅನುಭವ ಅವರಿಗಿದೆ. ಈ ಸಂದರ್ಭದಲ್ಲಿ ಖಾದ್ರಿ ತಮ್ಮ ಕಬ್ಬು ಉತ್ಪಾದನೆಯಲ್ಲಿ ಅನುಸರಿಸಿದ ಕ್ರಮ, ಪದ್ಧತಿಗಳನ್ನು ರೈತರೊಂದಿಗೆ ಹಂಚಿಕೊಂಡರು. ರೈತರು ಕೃಷಿಯತ್ತ ನಿರಾಸಕ್ತಿ ತೋರುತ್ತಿರುವುದೇ ಬೆಳೆಗಳು ಇಳುವರಿಯಲ್ಲಿ ಇಳಿಮುಖ ಆಗಲು ಕಾರಣ. ಹಿಂದೆ ರೈತರು ಶಕ್ತಿ ಮೀರಿ ದುಡಿಯುತ್ತಿದ್ದರು. ಆದರೆ, ಈಗ ನೌಕರರ ಮೇಲೆ ಅವಲಂಬಿತರಾಗುತ್ತಿದ್ದಾರೆ. ಈ ಕಾರಣಕ್ಕಾಗಿ ಬೆಳೆಗಿಂತ ಹುಲ್ಲಿನ ಪ್ರಮಾಣವೇ ಹೆಚ್ಚಾಗಿ ಬೆಳೆಯುತ್ತಿದೆ. ಜಿಲ್ಲೆಯಲ್ಲಿ ಬಳಸುವ ಕಬ್ಬಿನ ತಳಿಯನ್ನೇ ಬೇರೆ ರಾಜ್ಯಗಳಲ್ಲಿ ಬೆಳೆಯುತ್ತಾರೆ. ಆದರೆ, ಅಲ್ಲಿ ನಮಗಿಂತ ಹೆಚ್ಚಿನ ಇಳುವರಿ ಪಡೆಯುತ್ತಾರೆ. ಇದಕ್ಕೆ ಅಲ್ಲಿ ರೈತರೇ ಖುದ್ದಾಗಿ ದುಡಿಯುವುದೇ ಕಾರಣ. ಈ ಪ್ರಯತ್ನ ನಮ್ಮಲ್ಲಿ ನಡೆದರೂ ರೈತರು ಆರ್ಥಿಕವಾಗಿ ಸದೃಢರಾಗಿ ಬೆಳೆಯಲು ಸಾಧ್ಯವಿದೆ. ಕೃಷಿ ಪ್ರೀತಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ತಡೋಳಾದ ಪೂಜ್ಯ ರಾಜೇಶ್ವರ ಶಿವಾಚಾರ್ಯರು, ಕೃಷಿ ಮಿಷನ್‌ ಅಧ್ಯಕ್ಷ ಡಾ| ಎಸ್‌.ಎ. ಪಾಟೀಲ, ಹೈದ್ರಾಬಾದ್‌ನ ವಿಜ್ಞಾನಿ ಡಾ| ಜಿ. ಪಾರ್ಥಸಾರಥಿ, ವಿಶ್ವವಿದ್ಯಾಲಯಗಳ ಪ್ರಮುಖರಾದ ಡಾ| ಬಿ.ಎನ್‌.ಜನಗೌಡರ, ಡಾ| ಎನ್‌.ರೇವಣಪ್ಪ, ಡಾ| ಉಸ್ತುರ್ಗೆ, ಕೃಷಿ ಅಧಿಧಿಕಾರಿ ಡಾ| ಪುಥಾÅ, ಶರಣಪ್ಪ ಮುದಗಲ್‌ ಮತ್ತು ವೆಂಕಟರಾಮರೆಡ್ಡಿ ಮತ್ತು ಡಾ| ರವಿ ದೇಶಮುಖ ಉಪಸ್ಥಿತರಿದ್ದರು.

source:http://kannada.yahoo.com/%E0%B2%96-%E0%B2%A6-%E0%B2%B0-%E0%B2%97-%E0%B2%95-%E0%B2%B7-%E0%B2%8B%E0%B2%B7-%E0%B2%AA-091159884.html;_ylt=Av_kD_TEDeZx07ebV3GVh63upe5_;_ylu=X3oDMTRiNjZqcm4zBG1pdANCaWRhciBNb2R1bGUgU3RvcnlsaXN0BHBrZwNjYjZhMjQwMC1mZjc1LTNjNjgtYmE3MC1iNzFkYWMwMzdjMWIEcG9zAzIEc2VjA01lZGlhU3RvcnlMaXN0TFBUZW1wBHZlcgNmNzQ3MDE2MC01MjYwLTExZTItOWI1NS04NThkOTcxOWY5YWI-;_ylg=X3oDMTJzYm02M3ZnBGludGwDaW4EbGFuZwNrbi1pbgRwc3RhaWQDBHBzdGNhdAPgsrjgs4Hgsqbgs43gsqbgsr984LKc4LK_4LKy4LON4LKy4LOG4LKX4LKz4LOBBHB0A3NlY3Rpb25z;_ylv=3

ಬಸವಕಲ್ಯಾಣ ಶಾಸಕ ಅಟ್ಟೂರ ರಾಜೀನಾಮೆ


ಕೆಜೆಪಿಯೊಂದಿಗೆ ಗುರ್ತಿಸಿಕೊಂಡಿರುವ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಪಾಟೀಲ ಅಟ್ಟೂರ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾಧ್ಯಕ್ಷ ಬೋಪಯ್ಯ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಫ್ಯಾಕ್ಸ್‌ ಮೂಲಕ ರವಾನಿಸಿದ್ದಾರೆ.

ಜನಸ್ನೇಹಿ ಯಾತ್ರೆಯಲ್ಲಿ ಭಾಗವಹಿಸಲು ಬಸವಕಲ್ಯಾಣಕ್ಕೆ ಆಗಮಿಸಿದ್ದ ಮಾಜಿ ಸಿಎಂ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಶುಕ್ರವಾರ ಬಸವಕಲ್ಯಾಣದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅಟ್ಟೂರ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯ ಪ್ರಕಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಟ್ಟೂರ, 'ಬಿಜೆಪಿಯಲ್ಲಿ ಇದ್ದುಕೊಂಡು ಕೆಜೆಪಿಯ ಸಭೆ, ಸಮಾವೇಶಗಳಲ್ಲಿ ಭಾಗವಹಿಸುವುದು ಸರಿಯಲ್ಲ. ಹೀಗಾಗಿ ನೈತಿಕ ಹೊಣೆ ಹೊತ್ತು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಶುಕ್ರವಾರ ಸಂಜೆಯೇ ವಿಧಾನಸಭಾಧ್ಯಕ್ಷರಿಗೆ ಫ್ಯಾಕ್ಸ್‌ ಮೂಲಕ ರವಾನಿಸಿದ್ದೇನೆ. ಜನವರಿ 5ರಂದು ಬೆಂಗಳೂರಿನಲ್ಲಿ ಖುದ್ದಾಗಿ ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ ಮತ್ತೂಮ್ಮೆ ರಾಜೀನಾಮೆ ಪತ್ರ ನೀಡುತ್ತೇನೆ' ಎಂದರು.
'ಯಡಿಯೂರಪ್ಪ ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅವರು ನನ್ನನ್ನು ಗುರ್ತಿಸಿ ಬಿಜೆಪಿಯಿಂದ ಟಿಕೆಟ್‌ ನೀಡಿದ್ದಕ್ಕಾಗಿಯೇ ಇಂದು ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಷ್ಟವಿರಲಿ, ಸುಖವಿರಲಿ ನಾನು ಯಡಿಯೂರಪ್ಪ ಅವರೊಂದಿಗೆ ಇರುತ್ತೇನೆ. ಸ್ವ-ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಪ್ರತಿಕ್ರಿಯಿಸಿದರು.


ಬಿಜೆಪಿಯಲ್ಲಿ ಇದ್ದುಕೊಂಡು ಕೆಜೆಪಿಯ ಸಭೆ, ಸಮಾವೇಶಗಳಲ್ಲಿ ಭಾಗವಹಿಸುವುದು ಸರಿಯಲ್ಲ. ಹೀಗಾಗಿ ನೈತಿಕ ಹೊಣೆ ಹೊತ್ತು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಶುಕ್ರವಾರ ಸಂಜೆಯೇ ವಿಧಾನಸಭಾಧ್ಯಕ್ಷರಿಗೆ ಫ್ಯಾಕ್ಸ್‌ ಮೂಲಕ ರವಾನಿಸಿದ್ದೇನೆ.

ಬಸವರಾಜ ಪಾಟೀಲ ಅಟ್ಟೂರ, ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ.


source:http://kannada.yahoo.com/%E0%B2%AC%E0%B2%B8%E0%B2%B5%E0%B2%95%E0%B2%B2-%E0%B2%AF-%E0%B2%A3-%E0%B2%B6-%E0%B2%B8%E0%B2%95-%E0%B2%85%E0%B2%9F-%E0%B2%9F-%E0%B2%B0-214215192.html;_ylt=AsThz2cnY_eAL.Y7f9c5loVdzdIF;_ylu=X3oDMTQ3cG5sbDZzBG1pdANTZWN0aW9uIExpc3QgS2FybmF0YWthBHBrZwM4ODVjYWJkZC1hZWFhLTMxNGItODBjMi0xZDNlYTFiOGIxOWYEcG9zAzIEc2VjA01lZGlhU2VjdGlvbkxpc3QEdmVyAzcyNGIzYTAwLTUxMzctMTFlMi1hZGVmLWY2MmQxMjRlNGU3OQ--;_ylg=X3oDMTIwZGFhdXN2BGludGwDaW4EbGFuZwNrbi1pbgRwc3RhaWQDBHBzdGNhdAPgsrjgs4Hgsqbgs43gsqbgsr8EcHQDc2VjdGlvbnM-;_ylv=3

Tuesday, December 18, 2012

ಉ.ಕರ್ನಾಟಕ ಜನತೆ ಫುಲ್ ಖುಷ್: ಕಲಂ 371 ಗೆ ಸಂಸತ್ ಅಸ್ತು

ಉತ್ತರ ಕರ್ನಾಟಕ ಜನತೆಯ ನಾಲ್ಕು ದಶಕಗಳ ಕನಸು ಇಂದು ನನಸಾಗುವ ಮೂಲಕ ರಾಜ್ಯದಾದ್ಯಂತ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನತೆ ಸಂಭ್ರಮಾಚರಣೆಯಲ್ಲಿ ತೊಡಗುವಂತೆ ಮಾಡಿದೆ.

ಇಂದು ಲೋಕಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾದ ಕಲಂ 371 ತಿದ್ದುಪಡಿ ಮಸೂದೆ ಅಂಗೀಕಾರವಾಗುವ ಮೂಲಕ ಅಭಿವೃದ್ಧಿ ವಿಚಾರದಲ್ಲೂ ನಿರ್ಲಕ್ಷ್ಯಕ್ಕೊಳಗಾಗಿದ್ದೇವೆಂಬ ಭಾವನೆಯಲ್ಲಿದ್ದ ಉತ್ತರ ಕರ್ನಾಟಕದ ಜನತೆಗೆ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ.

ಮಸೂದೆ ಅಂಗೀಕಾರವಾಗುವ ಹಂತದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ರಾಜ್ಯ ಸರಕಾರ, ಕೇಂದ್ರ ಸರಕಾರಕ್ಕೆ ಪತ್ರಬರೆದು ಮಸೂದೆ ಕುರಿತು ನನ್ನ ಅಭಿಪ್ರಾಯ ಕೇಳಿಲ್ಲವೆಂದು ತಗಾದೆ ತೆಗೆದಿದ್ದ ಹಿನ್ನಲೆಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಗೊಳ್ಳುವುದೋ ಇಲ್ಲವೋ ಎನ್ನುವ ಆತಂಕ ಉತ್ತರ ಕರ್ನಾಟಕದ ಜನತೆಯನ್ನು ಕಾಡಿತ್ತು. ರಾಜ್ಯ ಸರಕಾರದ ಕ್ರಮಕ್ಕೆ ತೀವ್ರ ಆಕ್ರೋಶವಾಗಿತ್ತಲ್ಲದೇ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿತ್ತು.

ಜನತೆಯ ಆಕ್ರೋಶದಿಂದ ಎಚ್ಚೆತ್ತುಗೊಂಡ ರಾಜ್ಯ ಸರಕಾರ ತಕ್ಷಣವೆ ಕೇಂದ್ರಕ್ಕೆ ಪತ್ರ ಬರೆದು, ಪ್ರಸಕ್ತ ಅಧಿವೇಶನದಲ್ಲಿಯೇ ಮಸೂದೆ ಅಂಗೀಕಾರಕ್ಕೆ ಮನವಿ ಮಾಡಿದ್ದಲ್ಲದೇ ಆಕ್ಷೇಪಣೆಯನ್ನು ಹಿಂದಕ್ಕೆ ಪಡೆದಿತ್ತು.

ಅದರಂತೆ, ಇಂದು ಲೋಕಸಭೆಯಲ್ಲಿ ಕಲಂ 371(ಡಿ) ಮಸೂದೆ ಮಂಡನೆಯಾದ ವೇಳೆ ಮಸೂದೆ ಪರವಾಗಿ 342 ಮತಗಳು ಬಂದವು ವಿರೋಧವಾಗಿ ಇತರ ಪಕ್ಷಗಳು ಕೂಡಾ ಮತ ಚಲಾಯಿಸದಿರುವುದು ವಿಶೇಷವಾಗಿತ್ತು.

ಕಲಂ 371(ಡಿ) ಮಸೂದೆ ಜಾರಿಯಿಂದಾಗಿ ಉತ್ತರ ಕರ್ನಾಟಕ ಭಾಗಕ್ಕೆ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ದೊರೆಯುವುದಲ್ಲದೇ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ.


Source:http://kannada.webdunia.com/newsworld/news/national/1212/18/1121218032_1.htm